Sunday, 6 July 2014

ಇದು ಬೇಕೇ? 20 ಸೆಕೆಂಡುಗಳ ಸಮಯದ ಉಳಿತಾಯ ಮಾಡಿ ಏನು ಸಾಧಿಸುತ್ತಾರೆ?
ಸಭೆ ಸಮಾರಂಭಗಳಿಗೆ ಗಂಟೆ ಗಂಟೆ ತಡವಾಗಿ ಬರುವ ಸಚಿವರಂಥ ಅತಿಥಿ ಮಹಾಶಯರಿಗೆ ನಾಡಗೀತೆ 20 ಸೆಕೆಂಡು ಉದ್ದವಿದ್ದರೆ ಏನು ತೊಂದರೆಯೋ ಏನೋ. ಅದಕ್ಕೋಸ್ಕರ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಯಾಕೆ ಮುಕ್ಕು ಮಾಡಬೇಕು? ನನ್ನ ದೃಷ್ಟಿಯಲ್ಲಿ ಮಹಾಕವಿಗಳ ದಿವ್ಯ ಸೃಷ್ಟಿಯಲ್ಲಿ ಯಾರೇ ಆಗಲಿ, ಯಾಕೆ ಆಗಲಿ, ಕೈ ಆಡಿಸುವುದು ಶುದ್ಧ ತಪ್ಪು.
ಇದನ್ನು ಪ್ರಜ್ಞಾವಂತ ಸಾಹಿತಿಗಳು ಪ್ರತಿಭಟಿಸಬೇಕು.

(ಇದು ಇಂದಿನ ವಿಜಯ ಕರ್ನಾಟಕದಲ್ಲಿನ ಸುದ್ದಿ.)

03.07.2014
Photo: ಇದು ಬೇಕೇ? 20 ಸೆಕೆಂಡುಗಳ ಸಮಯದ ಉಳಿತಾಯ ಮಾಡಿ ಏನು ಸಾಧಿಸುತ್ತಾರೆ?
ಸಭೆ ಸಮಾರಂಭಗಳಿಗೆ ಗಂಟೆ ಗಂಟೆ ತಡವಾಗಿ ಬರುವ ಸಚಿವರಂಥ ಅತಿಥಿ ಮಹಾಶಯರಿಗೆ ನಾಡಗೀತೆ 20 ಸೆಕೆಂಡು ಉದ್ದವಿದ್ದರೆ ಏನು ತೊಂದರೆಯೋ ಏನೋ. ಅದಕ್ಕೋಸ್ಕರ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಯಾಕೆ ಮುಕ್ಕು ಮಾಡಬೇಕು? ನನ್ನ ದೃಷ್ಟಿಯಲ್ಲಿ ಮಹಾಕವಿಗಳ ದಿವ್ಯ ಸೃಷ್ಟಿಯಲ್ಲಿ ಯಾರೇ ಆಗಲಿ, ಯಾಕೆ ಆಗಲಿ, ಕೈ ಆಡಿಸುವುದು ಶುದ್ಧ ತಪ್ಪು.
ಇದನ್ನು ಪ್ರಜ್ಞಾವಂತ ಸಾಹಿತಿಗಳು ಪ್ರತಿಭಟಿಸಬೇಕು.

(ಇದು ಇಂದಿನ ವಿಜಯ ಕರ್ನಾಟಕದಲ್ಲಿನ ಸುದ್ದಿ.)

03.07.2014
ಹೀಗೊಂದು "PUZZLE". ಇದು ನೀವು ದೊಡ್ಡವರಿಗೆ ಸುಲಭವಾಗಿ ಅರ್ಥವಾಗಬಹುದು. ಅಥವಾ ನಿಮಗೆ ಇದು ಈವಾಗಲೇ ಗೊತ್ತಿರ ಬಹುದು. ಇದನ್ನು ಬಿಡಿಸಲು ನಿಮ್ಮ ಮಕ್ಕಳಿಗೆ ಹೇಳಿ............

"ಒಂದು ನದಿ. ನದಿ ದಡಕ್ಕೆ ಒಬ್ಬ ಮನುಷ್ಯ ಬಂದ. ಅವನ ಹತ್ತಿರ ಒಂದು ಹುಲ್ಲಿನ ಹೊರೆ (BUNDLE OF GRASS), ಒಂದು ಆಕಳು ಮತ್ತು ಒಂದು ಹುಲಿ ಇದ್ದವು. ಅವನಿಗೆ ಈ ಮೂರನ್ನೂ ಸುರಕ್ಷಿತವಾಗಿ ನದಿಯ ಇನ್ನೊಂದು ದಡಕ್ಕೆ ಸಾಗಿಸ ಬೇಕಿತ್ತು. ಅಲ್ಲಿದ್ದದ್ದು ಒಂದೇ ದೋಣಿ (BOAT).
ಅದರಲ್ಲಿ ಒಂದು ಸಲಕ್ಕೆ ಈ ಮೂರರಲ್ಲಿ ಒಂದು ಮತ್ತು ಅವನು ಮಾತ್ರ ಹೋಗ ಬಹುದಿತ್ತು
ಹೀಗಿರುವಾಗ, ಅವನು ಈ ಮೂರನ್ನೂ (ಹುಲ್ಲಿನ ಹೊರೆ, ಆಕಳು ಮತ್ತು ಹುಲಿ} ಯಾವ ರೀತಿಯಲ್ಲಿ ನದಿಯ ಇನ್ನೊಂದು ದಡಕ್ಕೆ ಸುರಕ್ಷಿತವಾಗಿ ಸಾಗಿಸುತ್ತಾನೆ?"

ಬೇಗ ಉತ್ತರ ಹೇಳಿದವರು ಜಾಣರು .

04.07.2014
Friends, Today is the Marriage Anniversary of my son Dr.Kiran and daughter-in-law
Dr.Kavitha. Let your blessings and good wishes bestow on them.

06.07.2014
Photo: Friends, Today is the Marriage Anniversary of my son Dr.Kiran and daughter-in-law 
Dr.Kavitha. Let your blessings and good wishes bestow on them.

06.07.2014
ಆಸೆ

ಗುಳಿ ಬಿದ್ದ ಕಣ್ಣುಗಳು
ಕೆದರಿದ ಬಿಳಿ ಕೂದಲು
ಸುಕ್ಕು ಕಟ್ಟಿದ ಚರ್ಮ
ಹೊರಳದ ನಾಲಿಗೆ
ತುಸುವೇ ಆಡುತ್ತಿದ್ದ ಉಸಿರು,
90 ದಾಟಿ ಮಲಗಿದ ನಮ್ಮಜ್ಜನ
ತುಟಿಗಳಷ್ಟೇ ಅಲುಗಾಡಿದವು,
ಇನ್ನು ಹೆಚ್ಚು ಸಮಯವಿಲ್ಲ
ಎಂದು ಕೊಂಡೆವು ನಾವು.
ಮೆಲ್ಲ ಕೈ ಸನ್ನೆ ಮಾಡಿ
ಕರೆದರು ಹತ್ತಿರ, ಹೋಗಿ
ಅವರ ತುಟಿಗೆ ಕಿವಿಯಾನಿಸಿದೆ,
ಅವರ ಕೊನೆಯಾಸೆ ಕೇಳಿ ದಂಗಾದೆ
ಆದರೂ ಓಡಿದೆ ಜಡಿ ಮಳೆಯಲ್ಲಿ,
ತಂದು ತಿನಿಸಿದೆ ಅಜ್ಜನಿಗೆ
ಉದ್ದಿನ ವಡಾ ಮತ್ತು ಈರುಳ್ಳಿ ಭಜಿಯನ್ನು,
ಗುಳಿ ಬಿದ್ದ ಕಣ್ಣುಗಳು ಮಿನುಗಿದವು,
ತೃಪ್ತಿ ಕಾಣಿಸಿತು ಮುಖದಲ್ಲಿ,
ಮತ್ತೂ ಒಂದು ವರ್ಷ
ಬದುಕಿದ್ದರು ನಮ್ಮಜ್ಜ.

05.07.2014.

Wednesday, 2 July 2014

ವಿರಹ - ಮಿಲನ

ಅರ್ಥವಾಗದ ಕಸಿವಿಸಿ,
ಭಾರವಾದ ಹೃದಯ,
ದೀರ್ಘವಾದ ನಿಟ್ಟುಸಿರುಗಳ
ಕಡಲು ಭೋರ್ಗರೆದರೂ
ಮಿಸುಕಾಡುತ್ತಿಲ್ಲ ಮನ,
ನೀರವ ರಾತ್ರಿಯಲ್ಲಿ
ಜೀರುಂಡೆಗಳ ಸದ್ದು,
ಮತ್ತಷ್ಟು ಜಡಗೊಂಡಿದೆ ದೇಹ,
ಏಕೆ ಹೀಗೆಂದು ಅರ್ಥವಾಗದೆ
ಬಳಲಿದೆ, ತೊಳಲಾಡಿದೆ,
ಕಡೆಗೊಮ್ಮೆ ರಾತ್ರಿ ತಡವಾಗಿ
ಬಂದ ಚಂದಿರ ನಸುನಗುತ
"ನಿನ್ನಳಲು ನಾನಿಲ್ಲದೆ" ಅಂದ.
ಕೇಳಿ ಗರಿ ಕೆದರಿತು ನನ್ನ ಮನ,
ಹೌದೆನಿಸಿ ಹೂವಿನಂತೆ ಹಗುರಾದೆ,
ಇನಿಯನೆದೆಯಲ್ಲಿ ತಲೆಯಿಟ್ಟು ಮೈ ಮರೆತೆ.


02.07.2014
ಮಲ್ಲಿಗೆ.

ನಮ್ಮ ಮನೆಯಂಗಳದಲ್ಲಿ
ಅರಳಿದ ಮಧುರ ಮಲ್ಲಿಗೆ,
ಬೀರಿದೆ ಕಂಪನು ಎಲ್ಲೆಡೆಗೆ,
ಶುಭ್ರ ಬಿಳಿ ವದನಾರವಿಂದ,
ಸಂಜೆಗತ್ತಲಿನ ಇನಿಸಮಯದಲ್ಲಿ
ಸದಾ ಶಾಂತಿಸಂದೇಶವ ಹೊತ್ತು
ಓಲೈಸುವ ತಂಗಾಳಿಗೆ ಮೈ ಮರೆತು
ತೊನೆದಾಡಿದೆ ಆನಂದದಿಂದ.

01.07.2014
5 Star Hospitals.

ದುಡ್ಡಿದ್ದವರಿಗೆ ಆಸ್ಪತ್ರೆಗಳಲ್ಲಿ ಸಹ 5 star ಸೌಕರ್ಯಗಳು ಸಿಗುತ್ತವೆ. ಹೆಚ್ಚಿನ ಒಳ್ಳೆಯ private ಆಸ್ಪತ್ರೆಗಳಲ್ಲಿ charge ಮಾಡುವಾಗ grading system, ಅನುಸರಿಸುತ್ತಾರೆ. ಅಂದರೆ, ಉದಾಹರಣೆಗೆ, ಒಂದೇ operation ಗೆ general ward ನಲ್ಲಿ 10000, semi special ಆದರೆ 15000, super special ಆದರೆ 20000 ಚಾರ್ಜ್ ಮಾಡುತ್ತಾರೆ. ವಿಶೇಷವೆಂದರೆ, ಈ ಎಲ್ಲಾ operations ಒಬ್ಬನೇ surgeon ಒಂದೇ ಒಳ್ಲೆಯ ರೀತಿಯಲ್ಲಿ ಮಾಡಿರುತ್ತಾನೆ. ಎಲ್ಲಾ service ಗಳಿಗೂ ಇದೇ ರೀತಿ ವ್ಯತ್ತಾಸವಿರುತ್ತದೆ. ಈ ಪದ್ದತಿಯ ತತ್ವ ಒಳ್ಳೆಯದು ಅನ್ನಿಸುತ್ತದೆ. ಇದ್ದವರು ಜಾಸ್ತಿ ಕೊಡಲಿ, ಇಲ್ಲದವರಿಗೆ ಸವಲತ್ತು ಸಿಗಲಿ ಅಂತ. Charges ಸ್ವಲ್ಪ higher side ಇರಬಹುದು. ಆಧುನಿಕ ರೀತಿಯ treatment ಗೆ ಇದು ಅವಶ್ಯವಿರ ಬಹುದು. ಆದರೆ ಸುಲಿಗೆಯ ಮಟ್ಟ ತಲುಪ ಬಾರದು. ಅಷ್ಟೆ.

02.07.2014