Saturday 7 February 2015

ವಿರಹ
++++
ನಗುವಿನ ಅಲೆ ಮೇಲೆ ಒಮ್ಮೆ ತೇಲಿಸಿದ ನೀನು
ಈಗ ಅಳುವಿನ ಮಡುವಿನಲಿ ಗಿರ್ಕಿ ಹೊಡೆಸಿ
ಮುಳುಗಿಸಿದಿಯಲ್ಲಾ, ಏಕೆ ಈ ಕ್ರೌರ್ಯ?
ಜೀವನ ಪೂರ್ತಿ ಆಸರೆಯಾಗಬೇಕಿದ್ದ ನೀನು,
ತೊರೆದು ನೂಕಿದೆಯಲ್ಲ ಈಗ ನನ್ನ ಕತ್ತಲ ಕೂಪಕ್ಕೆ
ಅಯ್ಯೋ ದೇವರೇ, ಸಹಿಸಲಾರೆ ನಾ ಈ ವಿಯೋಗವ
ಕಂಡಿದ್ದ ಕನಸುಗಳು ನೂರು, ಆದರೆ ನನಸಾದದ್ದು ಶೂನ್ಯ,
ಶಾಲೆಯಿಂದ ಬಂದ ಮಗುವೀಗ ಕೇಳುತ್ತಿದೆ
'ಎಲ್ಲರಿಗೂ ಅಪ್ಪ ಇದ್ದಾರೆ ನನ್ನ ಅಪ್ಪ ಎಲ್ಲಮ್ಮಾ 'ಎಂದು,
ಕಾಲನ ಕರೆ ನಿನಗಷ್ಟೇ ಏಕೆ ಬಂತು ಹೇಳು,
ನಮ್ಮಿರುವನ್ನೇ ಮರೆಯಿತೇ ಈ ಕ್ರೂರಿ ಕಾಲ
ನನ್ನ, ನನ್ನ ಕಂದನ ಮಾಡಿತಲ್ಲಾ ಅನಾಥ,
ಈ ಅಪೂರ್ಣ ಬದುಕು ಬದುಕಲಾರದ ನಾನು
ಸುಮ್ಮನೇ ಇರಬೇಕು ಭೂಮಿಯ ಮೇಲೆ
ಈ ನಿನ್ನ ಕಂದನಿಗಾಗಿ, ಈ ನಿನ್ನ ಕುರುಹಿಗಾಗಿ
***********
25.01.2015

No comments:

Post a Comment