Friday 12 September 2014

ಊರ್ಮಿಳೆ.

ಕಾಡು ಮೇಡು
ದಂಡಕಾರಣ್ಯದಲ್ಲಿ
ಲಕ್ಷ್ಮಣನಿಗಾಯಿತು
ರಾಮ ಸೀತೆಯರ
ಜೊತೆ ಹದಿನಾಲಕು
ವರುಷ ವನವಾಸ.

ಆದರೆ ಊರ್ಮಿಳೆ
ಪಾಪ ಅನುಭವಿಸಿದಳು
ಅರಮನೆಯಲ್ಲಿದ್ದೂ
ಹದಿನಾಲಕು ವರ್ಷದ
ಆಜೀವ ಕಾರಾವಾಸ

ಭ್ರಾತೃ ಪ್ರೇಮದೆದುರು
ಸತಿ ಸೋತಳು,
ಕಳೆದಳು ವಿರಹದ
ಜೀವನ, ತನ್ನ ದೈವವನು
ನೆನೆ ನೆನೆದು ಬಿಸು ಸುಯ್ದು.

12.09.2014

No comments:

Post a Comment