Saturday 27 September 2014

ಅನ್ನ ಭಾಗ್ಯ.
"ಅನ್ನ ಭಾಗ್ಯ" ಯೋಜನೆಯನ್ನು ರದ್ದು ಮಾಡಬೇಕು, ಅದರ ಫಲಾನುಭವಿಗಳಿಗೆ ಅದರ ಉಪಯೋಗವಾಗದೆ, ಉಳ್ಳವರೇ
ಅದನ್ನು ಉಪಯೋಗಮಾಡಿಕೋತಿದ್ದಾರೆ" ಎಂದು ಯಾರೋ ಧುರೀಣರು ಹೇಳಿದರೆಂದು, ಇತ್ತೀಚೆಗೆ ಒಂದು ಸುದ್ದಿ ಓದಿದ್ದೆ.
ಆಗ ನೆನಪಿಗೆ ಬಂದದ್ದು ಅದಕ್ಕೆ ಸಂಬಂಧಿಸಿದ ಈ ಜೋಕ್.......
"ಗುಂಡ ದಿನಾ ಒಂದು quarter brandy ಕುಡೀತಿದ್ದ. ಅವನ ದಿನದ ಸಂಪಾದನೆ ಅವನ ಕುಡಿತಕ್ಕೆ ಸಾಕಾಗುವಷ್ಟೇ ಇತ್ತು.
ಅವನ ಗೆಳಯ ತಿಂಮ ಕೇಳಿದ, 'ಅಲ್ಲಾ, ದುಡಿದದ್ದೆಲ್ಲ ಕುಡಿದು ಹಾಳು ಮಾಡುತ್ತಿದಿಯಲ್ಲಾ, ಹೊಟ್ಟೆಗೇನು ತಿಂತಿಯಾ?'
ಅದಕ್ಕೆ ಗುಂಡನ ಉತ್ತರ 'ಒಂದು ಖಾಲಿ qwarter bottle ಮಾರಿದರೆ ಒಂದು ರುಪಾಯಿಯಂತೆ, ತಿಂಗಳಿಗೆ 30 ರುಪಾಯಿ ಸಿಗುತ್ತದೆ. ಅದರಲ್ಲಿ, ಸಿದ್ರಾಮಣ್ಣನ ಒಂದು ರುಪಾಯಿಗೆ ಒಂದು kg ಅಕ್ಕಿಯ ಅನ್ನ ಭಾಗ್ಯ ಯೋಜನೆಯಲ್ಲಿ, 30 kg ಆಕ್ಕಿ ಖರೀದಿ ಮಾಡಿ ಅದನ್ಮು ಮನೆ ಮಂದಿಯೆಲ್ಲಾ ಊಟ ಮಾಡುತ್ತೇವೆ' ಅಂದ".
ಹೇಗಿದೆ ನೋಡಿ ಅನ್ನಭಾಗ್ಯ ಯೋಜನೆಯ ಉಪಯೋಗ?

24.09.2014

No comments:

Post a Comment