Saturday 1 November 2014

ಸುಜ್ನಾನ
ತಾಯಿ ಎಂದೂ ಮಗುವನ್ನು ಶಪಿಸುವುದಿಲ್ಲ.
ಭೂಮಿಗೆ ಯಾವ ದೋಷವೂ ಅಂಟುವುದಿಲ್ಲ.
ಸಾಧುವಾದವನು ಎಂದೂ ಹಿಂಸಿಸುವುದಿಲ್ಲ
ದೇವರು ಸೃಷ್ಟಿಸಿರುವುದನ್ನು ನಾಶಪಡಿಸಲ್ಲ
***ಸುಭಾಷಿತ
(ಸುಭಾಷಿತವೇನೋ ಚೆನ್ನಾಗಿದೆ. ಆದರೆ, ಎಲ್ಲದಕ್ಕೂ ಅಪವಾದವಿರುವ ಹಾಗೆ, ಇದಕ್ಕೂ
ಅಪವಾದವಿದೆ.
ನಮ್ಮ ಪಕ್ಕದ ಮನೆಯಲ್ಲೊಂದು ಒಂದು ಸಂಸಾರವಿದೆ. ತಾಯಿ, ಮಗ, ಮಗನ ಹೆಂಡತಿ ಮತ್ತು ಮದುವೆಯಾಗದ ಒಬ್ಬಳು ಮಗಳು.
ಹೇಗಿದ್ದರೆಂದರೆ, ದಿನ ಬೆಳಗಾದರೆ ಜಗಳ.
ಅತ್ತೆಗೂ ಸೊಸೆಗೂ ಹಣಾಹಣಿ. ಮಗ ಒಂದು ಶಬ್ಬ ಹೆಂಡತಿಯ ಪರ ಮಾತನಾಡಿದರೆ ಸರಿ, ತಾಯಿಂದ ಮಗನಿಗೆ ಹಿಡಿ ಶಾಪ, "ತಾಯಿಯ ಹೊಟ್ಟೆ ಉರಿಸುವ ನೀನು ಹಾಳಾಗಿ ಹೋಗ್ತಿ, ನಿನ್ನ ಸರ್ವನಾಶವಾಗಲಿ " ಅಂತೆಲ್ಲ ಹೆತ್ತ ತಾಯಿಯ ಶಾಪ ಮಗನಿಗೆ.
ಇದು ನಾನು ಸ್ವತ: ಕಿವಿಯಲ್ಲಿ ಕೇಳಿದ್ದು. ಏನೇನೂ ಉತ್ಪ್ರೇಕ್ಷೆಯಿಲ್ಲ. ಈಗ ಆ ಪಾಪದ ಮಗನಿಗೆ ಎದೆ ನೋವು. ಮೊನ್ನೆ ಮೊನ್ನೆ bye pass surgery ನೂ ಆಯ್ತು. ಹೇಗಿದೆ?
ಹಾಗೆಂದು ಎಲ್ಲಾ ತಾಯಂದಿರು ಹೀಗಂತಲ್ಲ. ಮಕ್ಕಳಿಗೋಸ್ಕರ ತನ್ನ ಜೀವ ತೇದ ತಾಯಂದಿರು ಲಕ್ಷಾಂತರವಿರ ಬಹುದು. ಇಂಥ ಕೇಸುಗಳು ಅಪವಾದವಿರ ಬಹುದು..
ಇನ್ನು ಭಗವಂತ. ನಂಬಿಕೆಯಂತೆ ಭಗವಂತ, ಭೂಭಾರ ಜಾಸ್ತಿಯಾದಾಗ, ಪ್ರಪಂಚದಲ್ಲಿ ಪಾಪ ಹೆಚ್ಚಾದಾಗ ಅವನ್ನು ಕಡಿಮೆ ಮಾಡಲು ತನ್ನ ಸೃಷ್ಟಿಯನ್ನೇ ನಾಶ ಮಾಡುತ್ತಾನಂತೆ

27.10.2014

No comments:

Post a Comment