Tuesday 11 November 2014

ಶಿಕ್ಷಕರಿಗೆ ಇಷ್ಟೊಂದು ಕೆಲಸಾನಾ......
"ಒಂದು ಕತೆ ಹೇಳ್ತೀರಾ ಟೀಚಾ...."
"ಸ್ವಲ್ಪ ತಡಿಯೇ, .....ಇವತ್ತು ಬೇರೆ ಕೆಲಸ ಇದೆ
ಅವನ್ನೆಲ್ಲ ಮುಗಿಸಿದ ನಂತ್ರ ಹೇಳ್ತೇನೆ...ಆಯ್ತಾ...."
......
.......
........
:ಇವತ್ತು ಹೇಳ್ತೀರಾ ಟೀಚಾ......?"
"ಇವತ್ತೂ ಆಗುವುದಿಲ್ಲ ಮಗೂ.....ನಾಳೆ ನೋಡುವ"
.......
.......
"ಇವತ್ತು....?"
"ಸಾರಿ ಮಗು. ಇನ್ನೂ ಕೆಲಸ ಮುಗ್ಡಿಲ್ಲ"
"ನಿಮ್ಮ ಕೆಲಸ ಮುಗಿಯುವುದು ಯಾವಾಗ ಟೀಚಾ......?"
"ಈ ಪಟ್ಟಿಯಲ್ಲಿರುವ ಕೆಲಸಗಳೆಲ್ಲಾ ಮುಗಿದ ಬಳಿಕ ಮಗೂ...."
"ಯಾವ ಪಟ್ಟಿ ಟೀಚಾ.....?"
"ಈ ಪಟ್ಟಿ ಮಗೂ
ಅಕ್ಷರ ದಾಸೋಹ
ಕ್ಷೀರ ಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಟ್ಯ ಪುಸ್ತಕ ವಿತರಣೆ
ಬ್ಯಾಗ್ ವಿತರಣೆ
ಚಿಣ್ಣರ ಅಂಗಳ
ಕೂಲಿಯಿಂದ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆ ಭೇಟಿ
ಎಸ್.ಡಿ.ಎಂ.ಸಿ ರಚನೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬುವುದು
ಪಾಠ ಯೋಜನೆ
ಪಾಠ ಬೋಧನೆ
ಕ್ರಿಯಾ ಯೋಜನೆ
ಕ್ರಿಯಾ ಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟಾ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತೆರೆಯುವುದು
ವಿದ್ಯಾರ್ಥಿ ವೇತನ
ಸಮನ್ವಯ ಶಿಕ್ಷಣ
ಜನಗಣತಿ
ಜಾತಿ ಗಣತಿ
ಚುನಾವಣಾ ಕಾರ್ಯ
ಬಿ.ಎಲ್.ಓ. ಕೆಲಸ
ಗುಳಿಗೆ ಹಂಚಿಕೆ
ಸಮಾಲೋಚನ ಸಭೆ
ಎಸ್.ಡಿ.ಎಂ.ಸಿ. ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರ ಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾ ದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕ ಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ.ಎಲ್.ಎಂ. ತಯಾರಿ
ಚಿಣ್ಣರ ಚುಕ್ಕಿ
ಚುಕ್ಕಿ ಚಿಣ್ಣ
ಕೇಳಿ ಕಲಿ
ಕ್ರೀಡಾ ಮೇಳ
ಪ್ರತಿಭಾ ಕಾರಂಜಿ
ಕಲಿ ಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ್ ಇನ್ಸ್ಪೈರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿ ಸಿ ಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕಾ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎಸ್,ಟಿ.ಎಸ್. ಪರೀಕ್ಷೆ
ಎನ್.ಎಮ್.ಎಮ್.ಎಸ್. ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ.ಕ. ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಶಿಕ್ಷಕರ ದಿನಾಚರಣೆ
ಪರಿಸರ ದಿನಾಚರಣೆ
ಸಾಕ್ಷರತಾ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜ್ಜೀವನ್ ರಾಂ ದಿನಾಚರಣೆ
ವನ ಮಹೋತ್ಸವ
ಮಕ್ಕಳ ದಿನಾಚರಣೆ
ಬಿಸಿಯೂಟ
ಶೌಚಾಲಯ ನಿರ್ವಹಣೆ.
........
...........
..........
"ನನಗೆ ನಿಮ್ಮ ಕತೆಯೆಲ್ಲ ಬೇಡ ಟೀಚಾ......."
***************
(ಇದು ಇಂದಿನ ಪ್ರಜಾವಾಣಿಯಲ್ಲಿ ಬಂದ ಒಂದು ಬರಹ. ಇದನ್ನು ಗ್ಯಾಲಕ್ಸೀ ಟಾಬ್‌ನಲ್ಲಿ newshunt
application ನಲ್ಲಿ ಓದಿದೆ. ಎರಡು ಕಾರಣಕ್ಕೆ ತಲೆ ಬಿಸಿಯಾಯಿತು. ಒಂದು - ಶಿಕ್ಷಕರಿಗೆ ಇಷ್ಟೊಂದು ಕೆಲಸವಾದರೆ ಮಕ್ಕಳ ಗತಿಯೇನು ಅಂತ, ಎರಡು - ಇಷ್ಟೊಂದು items ನ್ನ ಒಟ್ಟು
ಮಾಡಿ ಬರೆದ ಪುಣ್ಯಾತ್ಮನ ತಲೆಯಲ್ಲಿ ಅದೆಷ್ಟು ತಾಳ್ಮೆ ಇರಬಹುದು ಅಂತ...........
ಹಾಗೇನೇ, ನೀವುಗಳು ಸಹ ತಾಳ್ಮೆಯಿಂದ ಓದಿ.......ಯೋಚಿಸುವಷ್ಟರಲ್ಲಿ ಬೆಳಗೂ ಆಗ ಬಹುದು...
ಆದ್ದರಿಂದ, ಎಲ್ಲರಿಗೂ ಈಗಿನ ಶುಭರಾತ್ರಿ........ಮತ್ತು ನಾಳೆ ಬೆಳಗಿನ ಶುಭೋದಯ......ಒಂದೇ ಸಲ ಹೇಳುತ್ತೇನೆ.....  )

No comments:

Post a Comment