Sunday 24 August 2014


ದೇವರ ಪ್ರಸಾದ
ಇವತ್ತಿನ ಸಂಯುಕ್ತ ಕರ್ನಾಟಕದ ಮುಖಪುಟದ ಈ ಸುದ್ದಿ ನೋಡಿ.
ದೇವಸ್ಥಾನದ ಪ್ರಸಾದ ತಿಂದು 60 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರಂತೆ.
ಎಂತ ವಿಪರ್ಯಾಸ ಅಲ್ಲವೇ? ಭಕ್ತರು ದೇವರ ಪ್ರಸಾದವೆಂದು ನಂಬಿಕೆಯಿಂದ
ಸ್ವೀಕರಿಸಿದ್ದಕ್ಕೆ ಈ ಗತಿ.

ಬಹಳ ಹಿಂದೆ ಒಂದು ವಿಷಯ, ಕತೆಯೋ ಅಥವಾ ನಿಜ ಸಂಗತಿಯೋ ನೆನಪಿಲ್ಲ, ಕೇಳಿದ್ದೆ.
ಒಂದು ಊರಲ್ಲಿ ಒಂದು ನಿಗೂಢವಾದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಹರಡೀತಂತೆ.
ಯಾವುದೋ water born infection ನಿಂದ ಆ ಕಾಯಿಲೆ ಹರಡುತ್ತಿದೆ ಎಂದು ಗೊತ್ತಾದರೂ,
ಅದರ ಮೂಲ ಯಾವುದೆಂದು ಗೊತ್ತಾಗಲಿಲ್ಲ. ಜನರು ಕುಡಿಯುವ ನೀರಿನ ಭಾವಿಗಳ ನೀರಿನ sample ಗಳ ಪರೀಕ್ಷೆಯೂ ನಡೆಯಿತು. ಅವು ಸರಿಯಾಗಿಯೇ ಇದ್ದವು. ಕೊನೆಗೆ ಊರಿನ ಒಬ್ಬ ಯುವ ಮುಖಂಡ ಧೈರ್ಯ ಮಾಡಿ ಆ ಊರಿನ ದೇವಸ್ಥಾನದಲ್ಲಿ ಕೊಡುತಿದ್ದ ತೀರ್ಥದ sample ನ್ನು ಪರೀಕ್ಷೆ ಮಾಡಿದಾಗ ಅದರಲ್ಲಿತ್ತಂತೆ ಆ infection. ನಂತರ, ಮುಂದಿನ ಕ್ರಮ ತೆಗೆದು ಕೊಂಡರೆನ್ನಿ.

ಈಗ ಈ ತಾಜಾ ಸುದ್ದಿ.

ಇದರಿಂದ ನನಗನ್ನಿಸುವುದು, ದೇವಸ್ಥಾನವೇ ಆದರೂ ಅಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿ ಕೊಳ್ಳುವುದು ಭಕ್ತರ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ. ಅದರಲ್ಲೂ ಭಕ್ತರಿಗೆ ಹಂಚುವ ತೀರ್ಥಪ್ರಸಾದಾಗಳು ಶುದ್ಧವಾಗಿ ತಯಾರಾಗ ಬೇಕು. ಜನರು ಭಕ್ತಿಯಿಂದ ಏನು ಕೊಟ್ಟರೂ ಪ್ರಸಾದವೆಂದು ಕಣ್ಣು ಮುಚ್ಚಿ ತೆಗೆದು ಕೊಳ್ಳುತ್ತಾರೆ. ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳು, ಮತ್ತು ಮುಜರಾಯಿ ದೇವಸ್ಥಾನಗಳಾದರೆ ಸಂಬಂಧಿತ ಸರಕಾರಿ ಇಲಾಖೆ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು. ಹೋಟೆಲುಗಳ ಶುಚಿತ್ವದ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಆಗಾಗ check ಮಾಡುವಂತೆ ದೇವಸ್ಥಾನಗಳ ಪರಿಸ್ಥಿತಿಯನ್ನೂ check ಮಾಡಿದರೆ ತಪ್ಪಿಲ್ಲವೇನೋ? ಒಟ್ಟಿನಲ್ಲಿ ದೇವರ ಪ್ರಸಾದ ತೀರ್ಥಗಳಿಂದಲೂ ಅನಾರೋಗ್ಯ ಹರಡುವ ವಿಪರ್ಯಾಸ ನಡೆಯ ಬಾರದು. ಅಲ್ಲವೇ ?

Photo: ಇವತ್ತಿನ ಸಂಯುಕ್ತ ಕರ್ನಾಟಕದ ಮುಖಪುಟದ ಈ ಸುದ್ದಿ ನೋಡಿ.
ದೇವಸ್ಥಾನದ ಪ್ರಸಾದ ತಿಂದು 60 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರಂತೆ.
ಎಂತ ವಿಪರ್ಯಾಸ ಅಲ್ಲವೇ? ಭಕ್ತರು ದೇವರ ಪ್ರಸಾದವೆಂದು ನಂಬಿಕೆಯಿಂದ 
ಸ್ವೀಕರಿಸಿದ್ದಕ್ಕೆ ಈ ಗತಿ.

ಬಹಳ ಹಿಂದೆ ಒಂದು ವಿಷಯ, ಕತೆಯೋ ಅಥವಾ ನಿಜ ಸಂಗತಿಯೋ ನೆನಪಿಲ್ಲ, ಕೇಳಿದ್ದೆ. 
ಒಂದು ಊರಲ್ಲಿ ಒಂದು ನಿಗೂಢವಾದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಹರಡೀತಂತೆ.
ಯಾವುದೋ water born infection ನಿಂದ ಆ ಕಾಯಿಲೆ ಹರಡುತ್ತಿದೆ ಎಂದು ಗೊತ್ತಾದರೂ,
ಅದರ ಮೂಲ ಯಾವುದೆಂದು ಗೊತ್ತಾಗಲಿಲ್ಲ. ಜನರು ಕುಡಿಯುವ ನೀರಿನ ಭಾವಿಗಳ ನೀರಿನ sample ಗಳ ಪರೀಕ್ಷೆಯೂ ನಡೆಯಿತು. ಅವು ಸರಿಯಾಗಿಯೇ ಇದ್ದವು. ಕೊನೆಗೆ ಊರಿನ ಒಬ್ಬ ಯುವ ಮುಖಂಡ ಧೈರ್ಯ ಮಾಡಿ ಆ ಊರಿನ ದೇವಸ್ಥಾನದಲ್ಲಿ ಕೊಡುತಿದ್ದ ತೀರ್ಥದ sample ನ್ನು ಪರೀಕ್ಷೆ ಮಾಡಿದಾಗ ಅದರಲ್ಲಿತ್ತಂತೆ ಆ infection. ನಂತರ, ಮುಂದಿನ ಕ್ರಮ ತೆಗೆದು ಕೊಂಡರೆನ್ನಿ.

ಈಗ ಈ ತಾಜಾ ಸುದ್ದಿ.

ಇದರಿಂದ ನನಗನ್ನಿಸುವುದು, ದೇವಸ್ಥಾನವೇ ಆದರೂ ಅಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿ ಕೊಳ್ಳುವುದು ಭಕ್ತರ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ. ಅದರಲ್ಲೂ ಭಕ್ತರಿಗೆ ಹಂಚುವ ತೀರ್ಥಪ್ರಸಾದಾಗಳು ಶುದ್ಧವಾಗಿ ತಯಾರಾಗ ಬೇಕು. ಜನರು ಭಕ್ತಿಯಿಂದ ಏನು ಕೊಟ್ಟರೂ ಪ್ರಸಾದವೆಂದು ಕಣ್ಣು ಮುಚ್ಚಿ ತೆಗೆದು ಕೊಳ್ಳುತ್ತಾರೆ. ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳು, ಮತ್ತು ಮುಜರಾಯಿ ದೇವಸ್ಥಾನಗಳಾದರೆ ಸಂಬಂಧಿತ ಸರಕಾರಿ ಇಲಾಖೆ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು. ಹೋಟೆಲುಗಳ ಶುಚಿತ್ವದ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಆಗಾಗ check  ಮಾಡುವಂತೆ ದೇವಸ್ಥಾನಗಳ ಪರಿಸ್ಥಿತಿಯನ್ನೂ check ಮಾಡಿದರೆ ತಪ್ಪಿಲ್ಲವೇನೋ? ಒಟ್ಟಿನಲ್ಲಿ ದೇವರ ಪ್ರಸಾದ ತೀರ್ಥಗಳಿಂದಲೂ ಅನಾರೋಗ್ಯ ಹರಡುವ ವಿಪರ್ಯಾಸ ನಡೆಯ ಬಾರದು. ಅಲ್ಲವೇ ?

No comments:

Post a Comment