Saturday 9 August 2014

ತೆರೆದ ಕೊಳವೆ ಭಾವಿಗಳಲ್ಲಿ ಮಕ್ಕಳು ಬೀಳುವ ದುರಂತಗಳು - ಒಂದು ಸಲಹೆ.

ಈ ತರಹದ ಅವಘಡಗಳು ಸಂಭವಿಸಿದಾಗಷ್ಟೆ ಎಚ್ಚರಗೊಂಡು ವ್ಯರ್ಥ ಪ್ರಯತ್ನದಲ್ಲಿ ಲಕ್ಷಾಂತರ ರೂಪಾಯಿ
ಖರ್ಚು ಮಾಡುವ ಬದಲು, ಸರಕಾರ village level ಅಧಿಕಾರಿಗಳನ್ನು ಬಳಸಿಕೊಂಡು, ಅಂತ ಕೊಳವೆ ಭಾವಿಗಳನ್ನು ಗುರುತಿಸಿ, as a one time measure, ತಾನೇ PWD ನ್ನು ಬಳಸಿಕೊಂಡು, ಅಂತ ಎಲ್ಲ ಭಾವಿಗಳನ್ನು ಮುಚ್ಚಿಸಿ ಹಾಕಬೇಕು.
ಆಮೇಲೆ, ನೀರು ಬರದ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚುವ ಜವಾಬ್ದಾರಿಯನ್ನು, ಭಾವಿ ಕೊರೆದ company ಯದೇ ಎಂದು condition ಮಾಡಬೇಕು. ಕೂಡಲೇ ಈ ಕೆಲಸ ಮಾಡಿದರೆ, ಕೊರೆದು ತೆಗೆದ ಮಣ್ಣೂ ಅಲ್ಲೇ ಇರುತ್ತದೆ, ಮುಚ್ಚುವುದೂ ಸುಲಭ. ಯಾವುದೇ ಊರಿನಲ್ಲಿ ಕೊಳವೆ ಭಾವಿ ಕೊರೆಯುವುದು village level ಅಧಿಕಾರಿಗಳಿಗೆ ಗೊತ್ತಾಗಿಯೇ ಆಗುತ್ತದೆ. ಅವರು ಇದನ್ನು ಸುಲಭವಾಗಿ follow up ಮಾಡಬಹುದೆಂದು ನನ್ನ ಅನಿಸಿಕೆ.

ಇತ್ತೀಚೆಗಿನ ಕೆಲವು ವರದಿಗಳ ಪ್ರಕಾರ, ಕೆಲವು ಸರಕಾರಿ department ಗಳೇ ವಿವಿಧ ಯೋಜನೆಗಳ
ಅಡಿಯಲ್ಲಿ, ಕೊಳವೆ ಭಾವಿಗಳನ್ನು ಕೊರೆಯಿಸಿ, ಅವುಗಳಲ್ಲಿ ನೀರು ಬಾರದಿದ್ದಾಗ ಅವುಗಳನ್ನು ಮುಚ್ಚದೆ
ಹಾಗೇ ಬಿಟ್ಟು ಹೋಗುತ್ತಾರಂತೆ. ಇದು ಅತೀ ಅಕ್ಷಮ್ಯ. ಇಂಥ fail ಆದ ಭಾವಿಗಳನ್ನು ಸಂಬಂಧ ಪಟ್ಟ
ಅಧಿಕಾರಿಗಳು ಕೂಡಲೇ ಮುಚ್ಚಿಸಬೇಕು. ಇದನ್ನು ಗ್ರಾಮ ಪಂಚಾಯತಿ followup ಮಾಡಿ, ಅಗುವ ಹಾಗೆ
ಮಾಡಬೇಕು. ನಿಷ್ಕಾಳಜಿ ಮಾಡಿದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ suspend ಮಾಡಬೇಕು,
ಯಾಕಂದರೆ, ಇದು ಸಾವಿಗೆ ಕಾರಣವಾಗ ಬಹುದಾದ ಗುರುತರವಾದ ಕರ್ತವ್ಯಲೋಪ.

ನೀರು ಬರದ ಭಾವಿಗಳನ್ನು ಕೂಡಲೇ ಮುಚ್ಚಲು ತಪ್ಪಿದ company ಗಳ
ಕೊರೆಯುವ ಯಂತ್ರಗಳನ್ನು ಜಿಲ್ಲಾಡಳಿತ ಕೂಡಲೇ ಮುಟ್ಟುಗೋಲು ಹಾಕಿಕೊಂಡು, ಆ ನೀರು ಬರದ ಭಾವಿಯನ್ನು company ಮುಚ್ಚಿದ ಮೇಲಷ್ಟೇ ಯಂತ್ರಗಳನ್ನು ರಿಲೀಸ್ ಮಾಡಬೇಕು. ಈ ರೀತಿಯ ನಿಷ್ಟುರವಾದ ಕ್ರಮ ತೆಗೆದು ಕೊಂಡರೆ ಮಾತ್ರ, ಪಾಪ, ಈ ತರ ನಿಷ್ಪಾಪಿ ಮಕ್ಕಳು ಇಂಥ ಭಾವಿಗಳಲ್ಲಿ ಬಿದ್ದು ಸಾಯುವುದನ್ನು ತಪ್ಪಿಸ ಬಹುದು. ಮಾಧ್ಯಮದವರು, ಬರೇ ಇಂಥ ಘಟನೆಗಳಿಗಷ್ಟೇ ಪ್ರಚಾರ ಕೊಡುವ ಬದಲು, ಮೇಲೆ ಹೇಳಿದ ರೀತಿಯಲ್ಲಿ ಸರಕಾರದ ಮೇಲೆ ಒತ್ತಡ ತರ ಬಹುದು.

No comments:

Post a Comment