Wednesday 20 August 2014

ಗಣತಂತ್ರದಾಟ.

ಭಾರತಾಂಬೆಯ ಮಕ್ಕಳು ನಾವು
ನಮಗೇನೂ ಬಂಧನವಿಲ್ಲ, ನಾವು
ಸರ್ವತಂತ್ರ ಸ್ಞತಂತ್ರರು, ನಮ್ಮನ್ನಾರೂ
ಕೇಳುವವರಿಲ್ಲ, ನಾವಾಡಿದ್ದೇ ಆಟ,
ಅದು ಗಣತಂತ್ರದಾಟವಂತೆ, ಇಲ್ಲಿ
ತಂತ್ರಗಳಿಗೇ ಬೆಲೆಯಂತೆ, ಲಕ್ಶ್ಮಿಯದೆ
ಕಳೆಯಂತೆ, ಸಂತರಿಗೆ ಬೆಲೆ ಇಲ್ಲವಂತೆ
ಧೋತಿ ಕುರ್ತಾಗಳೇ ಇಲ್ಲಿ ರಾಜರಂತೆ,
ಪ್ರಜೆಗಳ ಪಾಡು ಪಡಿಪಾಟಲಂತೆ,
ಇದೆಲ್ಲಾ ವಿಚಿತ್ರವೆನಿಸಿದರೂ ನಿಜವೇ ಅಂತೆ.

18.08.2014

No comments:

Post a Comment