Monday 14 July 2014

FACEBOOK - ಒಂದು ಅನಿಸಿಕೆ


FB ಇರುವುದು ಅನಾವಶ್ಯಕ ವಿವಾದ ಮತ್ತು ಜಗಳಕ್ಕಲ್ಲ. ಕೆಲವರ ವಿವಾದಾತ್ಮಕ ಹೇಳಿಕೆಗಳು, ಕೆಲವೊಮ್ಮೆ ನಮ್ಮನ್ನು react ಮಾಡಲು ಪ್ರಚೋದಿಸುತ್ತವೆ. ಅಂಥ ಸಮಯದಲ್ಲಿ ಜಾಗರೂಕತೆಯಿಂದ ಇರಬೇಕು. ಕೆಲವೊಮ್ಮೆ ಮೌನ, ಕೆಲವೊಮ್ಮೆ ಸರಳವಾದ ಕಾಮೆಂಟ್ ಸರಿ ಇರುತ್ತದೆ.

ಹಿಂದೊಮ್ಮೆ, ಒಬ್ಬರು ನವ್ಯ ಕವಿಗಳು, ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕವಿತೆ ಓದಿದ ಒಬ್ಬರು ಹಿರಿಯ ಕವಿಗಳನ್ನು ಯಾರೆಂದು ಹೆಸರು ಹೇಳದೆ ಸಿಕ್ಕಾಬಟ್ಟೆ ಟೀಕಿಸುತ್ತಿದ್ದರು. ಆ ಬಗ್ಗೆ ಬಹಳ ಸ್ಟೇಟಸ್ ಹಾಕಿದ್ದರು. ನನಗೆ ಆಗಿನ್ನೂ fb ಹೊಸದು. ನನಗೆ, ನಿಜವಾಗಿ ಅವರು ಯಾರನ್ನು ದೂರುತ್ತಿದ್ದಾರೆಂದು ಗೊತ್ತಾಗಲಿಲ್ಲ. ನಾನು ಯಾರ ಬಗ್ಗೆ ಹೇಳುತ್ತಿದ್ದೀರೆಂದು ಪದೇ ಪದೇ ಕೇಳಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಆ ಮಹಾಶಯರು, ನನ್ನದೇ ಬುದ್ಧಿಮತ್ತೆಯ ಅವಹೇಳನಕಾರಿ ದೂಷಣೆಯನ್ನು ಶುರು ಮಾಡಿದರು. ಕೊನೆಗೆ, ಇವರ ಸಹವಾಸವೇ ಬೇಡವೆಂದು, ಅವರನ್ನು unfriend ಮತ್ತು block ಮಾಡಿ ನಿರಾಳವಾದೆ.

ಮತ್ತೊಂದು ಮಜದ ಸಂಗತಿಯೆಂದರೆ, ಅವರ ಸ್ಟೇಟಸ್ ಗಳನನ್ನು ಬರೇ like ಮಾಡಿದ ಬಹಳ ಮಂದಿಯಲ್ಲಿ ಕೆಲವರನ್ನು message box ಮುಖಾಂತರ ವಿಚಾರಿಸಿದೆ, " ಲೈಕ್ ಮಾಡಿದ್ದೀರಲ್ಲಾ, ನಿಮಗೇನಾದರೂ ಗೊತ್ತಾಯಿತಾ? " ಎಂದು. ಬಂದ ಉತ್ತರ ಏನು ಗೊತ್ತೇ, " ನಮಗೂ ಗೊತ್ತಾಗಲಿಲ್ಲ, ಹಾಗೇ ಸುಮ್ಮನೆ like ಒತ್ತಿದ್ದೇವೆ" ಎಂದು. ಹೇಗಿದೆ?
ಈಗ friends ನ್ನು ಮಾಡಿಕೊಳ್ಳುವಾಗ ಸ್ವಲ್ಪ ಅವರ timeline ಮೇಲೆ ಕಣ್ಣು ಹಾಯಿಸುತ್ತೇನೆ. ಬಹಳ ಕ್ರಾಂತಿಕಾರಿ ವಿಚಾರಗಳು, ವ್ಯಕ್ತಿ ನಿಂದನೆ, ಬರೇ (ನನಗೆ) ಅರ್ಥವಾಗದ ಕವಿತೆಗಳು, ನಿಷ್ಠುರವಾದ ರಾಜಕೀಯ ವಾದ, ಇತ್ಯಾದಿಗಳ ಬಗ್ಗೆ ಪೋಸ್ಟ್ ಹಾಕುವವರನ್ನು ಹಾಗು ಅಸಭ್ಯವಾದ ಭಾಷೆ ಬಳಸುವವರನ್ನು ಮೊದಲೇ ದೂರವಿಢುವ ಪ್ರಯತ್ನ ಮಾಡುತ್ತಿದ್ದೇನೆ. ವಿವಾದಿತ ವಿಷಯಗಳ ಬಗ್ಗೆ ಹೆಚ್ಚು ಗಹನವಾದ ಚರ್ಚೆಗೆ ಇಳಿಯುವುದಿಲ್ಲ.

ಹೀಗೆ, ಈಗ ತಕ್ಕ ಮಟ್ಟಿಗೆ fb ಯನ್ನು enjoy ಮಾಡ್ತಿದ್ದೇನೆ ಎನ್ನ ಬಹುದು.

13.07.2014

No comments:

Post a Comment