Tuesday 22 July 2014

FB ಯಲ್ಲಿ ಕವನ ಮತ್ತು ಬರಹಗಳ ಬಗ್ಗೆ ಒಂದು ಮಾತು.

ನಾವು fb ಯಲ್ಲಿ ಬರೆಯುವುದು ನಮ್ಮ ಆತ್ಮ ಸಂತೋಷಕ್ಕೆ. ಮನದಲ್ಲಿ ಮೂಡಿದ ಭಾವನೆಗಳನ್ನು ಸಭ್ಯ ರೀತಿಯಲ್ಲಿ ಗದ್ಯ ಅಥವಾ ಪದ್ಯದ ರೂಪದಲ್ಲಿ ಹೊರಹಾಕುವ ಸ್ವಾತಂತ್ರ್ಯ ನಮಗಿದೆ ನನ್ನದೊಂದು ವೈಯುಕ್ತಿಕ ಅಭಿಪ್ರಾಯವೆಂದರೆ, ಬರೆದದ್ದು ಓದುವವರಿಗೆ ಅರ್ಥವಾಗುವಂತಿದ್ದರೆ ಒಳ್ಳೆಯದು.ಯಾಕಂದರೆ ಇಲ್ಲಿಯ ಓದುಗರೆಲ್ಲರೂ ವಿದ್ವಾಂಸರೇ ಆಗಿರುವುದಿಲ್ಲ. ಇನ್ನು ಕಾಮೆಂಟುಗಳು. ಅವನ್ನು ಲೈಟ್ ಆಗಿ ತೊಗೊಳ್ಲ ಬೇಕು. ಯಾರಾದರೂ ಅರ್ಥವಾಗಲಿಲ್ಲವೆಂದರೆ, ಕವನದ ಹಿಂದಿರುವ ನಮ್ಮ ಅರ್ಥ ಮತ್ತು ಇಂಗಿತವನ್ನು ವಿವರಿಸಿ ಹೇಳುವ ತಾಳ್ಮೆ ನಮಗಿರಬೇಕು. ಅಸಭ್ಯವಲ್ಲದ ತಮಾಶೆಯ ಕಾಮೆಂಟುಗಳನ್ನು sportive ಆಗಿ ನಕ್ಕು ಸುಮ್ಮನಾಗಬೇಕು. ಯಾರಾದರೂ ಅಸಭ್ಯವಾದ ಕಾಮೆಂಟುಗಳನ್ನು ಮಾಡುತ್ತಿದ್ದರೆ ಅಂಥವರನ್ನು ನಿರ್ದಾಕ್ಷಿಣ್ಯವಾಗಿ unfriend ಮಾಡಿ block ಸಹ ಮಾಡಬೇಕು. ಬರೇ unfriend ಮಾಡಿದರೆ ಸಾಲದು block ಸಹ ಮಾಡಬೇಕು. ಅತೀ unparliamentary content ನ ಕಮೆಂಟ್ ಮಾಡುವವರಿದ್ದರೆ ಅಂಥವರನ್ನು report ಮಾಡಿ ಅವರ fb account ನ್ನೇ ಸ್ಥಗಿತ
ಗೊಳಿಸ ಬಹುದು. ನಮ್ಮ fb ಗೋಡೆ ನಮ್ಮ property. ಅಶ್ಲೀಲ ಮತ್ತು ಅಸಭ್ಯ, ಹಾಗೂ ಸಮಾಜಿಕ ಮತ್ತು ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಹೊರತು ಪಡಿಸಿ ನಾವು ಬೇಕಾದ್ದು ಬರೆಯ ಬಹುದು.

ಇದು, ಕೆಲವರು ಹಾಕಿದ ಸ್ಟೇಟಸ್ ಗಳನ್ನು ನೋಡಿದಾಗ ನನಗೆ ಅನ್ನಿಸಿದ್ದಷ್ಟೆ.


22.07.2014

No comments:

Post a Comment