Sunday 5 October 2014


ವಿಶಾಲ ಕರ್ನಾಟಕ 

ಸ್ನೇಹಿತರ ಸ್ಟೇಟಸ್ ಒಂದಕ್ಕೆ ನನ್ನ ಪ್ರತಿಕ್ರಯೆ.
ನಿಮಗೇನನ್ನಿಸುತ್ತೋ ನೋಡಿ.....
***********
"ನಮ್ಮದು ಕರ್ನಾಟಕ ವಿಶಾಲ ಕರ್ನಾಟಕವಾದರೂ, ಪ್ರತಿ 8 kms ಗೆ ಭಾಷೆಯ dialect ಬದಲಾಗುತ್ತೆ. ಈ board ನ್ನು joke ಎಂದು ತಿಳಿದು ಕೊಳ್ಳದೆ, ಅಲ್ಲೇ ವಿಚಾರಿಸಿದ್ದರೆ, ಅದೊಂದು surname ಎಂದು ಗೊತ್ತಾಗಿ ಹೋಗುತ್ತಿತ್ತು. ಅಂಥ surnames ಉತ್ತರ ಕರ್ನಾಟಕದಲ್ಲಿ ಬಹಳ ಅಂದ್ರೆ ಬಹಳ common. ಉಳ್ಳಾಗಡ್ಡಿ, ಮೆಣಸಿನಕಾಯಿ, ಇತ್ಯಾದಿ surnames ಇದ್ದಾವೆ. ನಮ್ಮ ಹೆಸರು surnames ಬಗ್ಗೆ ನಮಗಿರುವಂತೆ ಅವರಿಗೂ ಅಭಿಮಾನ ವಿರುತ್ತದೆ. ಯಾರೋ ಕಾಮೆಂಟ್ ಮಾಡಿದಂತೆ, ನಿಮಗೆ "ಮೆಣಸಿನ ಕಾಯಿ ದವಾಖಾನೆ" board ಸಹ ನಿಮಗೆ ಖಂಡಿತಾ ಹುಡುಕಿದರೆ ಸಿಗುತ್ತೆ. ಹಾಗೇ, ಈ ಕಡೆ, "ಕಮಲ ಬೇಕರಿ" "ಕಾವೇರಿ ಬೇಕರಿ" ಅಂತೆಲ್ಲ ಬೋರ್ಡ್ ಕನ್ನಡದಲ್ಲಿ ಹಾಕಿ ಕೊಳ್ಳುತ್ತಾರೆ. ಅಂದರೆ, ನಮಗೆ ಕಮಲ ಬೇಕು ಅಂತಾನಾ ಅಥವಾ ಇಲ್ಲಿ bread ಸಿಗತ್ತೆ ಅಂತಾನಾ?
ಇವೆಲ್ಲ, commedy stage show ಗಳಲ್ಲಿ ಚೆನ್ನಾಗಿರುತ್ತದೆ. ಸಾಮಾಜಿಕ ತಾಣಗಳ ಜೋಕಾಗಿ ಅಲ್ಲ.
ಆದ್ದರಿಂದ ಈ ಭಾಷೆ, ಇತ್ಯಾದಿಗಳ ಬಗ್ಗೆ ತಮಾಶೆಗೆ ಇಳಿಯುವ ಮೊದಲು, ಯೋಚಿಸ ಬೇಕು. ಹೀಗೆಲ್ಲ ವಿಚಾರ ಹೆಚ್ಚು ಮಾಡಿದರೆ, ಈಗ ಅಖಂಡ ಆಂಧ್ರ ಹೋಗಿ, ತೆಲಂಗಾಣ - ಸೀಮಾಂಧ್ರ ಆದಂತೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಆಗುವ ದಿನ ದೂರ ವಿರುವುದಿಲ್ಲ. ಆದ್ದರಿಂದೆ ಅಖಂಡತೆಯನ್ನು ಉಳಿಸುಕೊಳ್ಳುವ ಬಗ್ಗೆ ಚಿಂತಿಸಬೇಕೇ ವಿನಃ ಇಂಥಹ ವಿಷಯಗಳ ಬಗ್ಗೆ ಅಲ್ಲ. ಈಗಾಗಲೇ, ಉತ್ತರ ಕರ್ನಾಟಕದ ಜನರಲ್ಲಿ ತಮ್ಮನ್ನು ಹಳೆ ಮೈಸೂರಿಗರು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ಬರ್ತಾ ಇದೆ. ಅದನ್ನು ಅವಕಾಶವಾದಿ ರಾಜಕಾರಿಣಿಗಳು ದುರುಪಯೋಗ ಪಡಿಸಿಕೊಳ್ಲುತ್ತಾರೆ. ಈಗಾಗಲೇ "ಕತ್ತಿ" ಪುರಾಣ ಶುರು ಆಗಿದೆ. ಹೀಗಾಗಲು ಬಿಡಬಾರದು.
ಯಾವುದೋ ಚಿಕ್ಕ joke ಬಗ್ಗೆ ಇಷ್ಟುದ್ದ ಭಾಷಣ ಮಾಡಿದ, ಅಂದು ಕೊಳ್ಳ ಬೇಡಿ
ನಾನು ನೇರವಾಗಿ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದು ಮನಸ್ಸಿಗೆ ನೋವು ತಂದಿದ್ದರೆ ಕ್ಷಮೆ ಇರಲಿ"  04.10.2014

No comments:

Post a Comment