Friday 13 June 2014

"ಖರ್ ಖರೆ ದೇವರಿಗೆ
ಮರದ ಜಾಗಟೆ"


ಅಂತ ನಮ್ಮಜ್ಜ ಹೇಳುತಿದ್ದರು.
ಇದರ ಅರ್ಥ ಏನೆಂಬುದು
ಸರಿಯಾಗಿ ನೆನಪಿಗೆ ಬರುತ್ತಿಲ್ಲ.
ಬಹುಶ: ಅದು ಬೇಕು, ಇದು ಬೇಕು,
(ಪಾತ್ರಿ ಮುಖಾಂತರ - ಪಾತ್ರಿ ಅಂದರೆ
ದೇವರು ಮೈ ಮೇಲೆ ಬಂದು ಮಾತನಾಡುವವ)
ಎಂದು ಡಿಮಾಂಡು ಮಾಡುವ ದೇವರಿಗೆ
ಸದ್ದಿಲ್ಲದೆ ಮರದ ಜಾಗಟೆ ಹೊಡೆದು
ಪೂಜೆ ಮುಗಿಸಿಬಿಡಬೇಕು
ಎಂಬುದು ಈ ಮಾತಿನ ಅರ್ಥವಿರಬೇಕು. 


೧೨. ೦೩. ೨೦೧೪

No comments:

Post a Comment