Sunday 15 June 2014

ಅಂತರಂಗದ ಕರೆ 

ನಮಗೆ ಜೀವನದಲ್ಲಿ,
ದುಷ್ಟರಿಂದ ದೂರಾಗಲು
ಕಷ್ಟಗಳಿಂದ ಪಾರಾಗಲು
ನಷ್ಟದಿಂದ ತಪ್ಪಿಸಿಕೊಳ್ಳಲು
ದೇವರಿಂದ ಅಥವಾ ಸನ್ನಿವೇಶದಿಂದ
ಕೆಲವು ಅವಕಾಶಗಳು
ಒದಗಿ ಬರುತ್ತವೆ.
ಆಗ ನಮ್ಮ ಅಂತರಂಗ
ಸರಿ ದಾರಿ/ನಿರ್ಣಯಗಳ ಬಗ್ಗೆ
ಮನಸ್ಸಿಗೆ ಪಿಸುಗುಡುತ್ತಿರುತ್ತದೆ.
ಈ ಅಂತರಂಗದ ಕರೆಗೆ ಓ ಗೊಟ್ಟು
ನಿರ್ಧಾರಗಳನ್ನು ತೆಗೆದು ಕೊಂಡರೆ
ನಾವು, ದುಷ್ಟರಿಂದ ದೂರಾಗಿ,
ಕಷ್ಟ ನಷ್ಟಗಳಿಂದ ತಪ್ಪಿಸಿಕೊಂಡು
ಬದುಕು ಸುಗಮಗೊಳಿಸಿಕೊಳ್ಳ ಬಹುದು.
ಆದ್ದರಿಂದ ಅಂತರಂಗದ ಕರೆಗೆ
ಬುದ್ದಿ/ಮನಸ್ಸನ್ನು ಯಾವಾಗಲೂ
ತೆರೆದಿಟ್ಟಿರಬೇಕು.


28.02.2014

No comments:

Post a Comment