Friday 13 June 2014

ಅಂದು ನಮ್ಮೂರು ಅಂದ 

ಅಂದು ನಮ್ಮೂರ 
ಅಂದವೇ ಅಂದ.
ಮನೆಯಂಗಳದಿ ನಿಂತು
ಮೂಡಣ ದಿಟ್ಟಿಸಿದರೆ
ದಿಗಂತದಂಚಿನವರೆಗೆ
ಭತ್ತದ ಪೈರಿನ
ಹಸಿರು ಹಾಸು,
ಮಾಗಿದ ಮೇಲೆ
ಹೊಂಬಣ್ಣದ ಹೊದಿಕೆಯ
ಹೊಯ್ದಾಟದ ಮೆರುಗು.
ಆದರಿಂದು ನೋಡಿದೆನಲ್ಲಿ
ಬಯಲೂ ಇಲ್ಲ.
ಬತ್ತದ ಪೈರೂ ಇಲ್ಲ.
ಮಾನವನ ಅತಿಕ್ರಮಣ
ಮನೆ ಮನೆಗಳ ನಿರ್ಮಾಣ
ಪ್ರಕ್ಟತಿ ಮೇಲೆ ಆಕ್ರಮಣ
ಯಾರೂ ತಡೆಯದ ಈ
ದುರಂತ.


೧೪. ೦೩. ೨೦೧೪

No comments:

Post a Comment