Sunday 2 April 2017

ಅಪರೂಪದ ಶೈವ ಕ್ಷೇತ್ರ, ಕರ್ನಾಟಕದ ಶಿರಸಿ
ನಗರ ಸಮೀಪದ "ಸಹಸ್ರಲಿಂಗ". ಇಲ್ಲಿ ಶಾಲ್ಮಲಾ
ನದಿ ಹರಿದಿದೆ...ನದಿಯ ಪಾತ್ರ ಶಿಲಾಮಯವಾಗಿದೆ.
ಈ ಶಿಲೆಯಲ್ಲಿ ಸಾವಿರಾರು ಶಿವಲಿಂಗ ಮತ್ತು ನಂದಿಗಳನ್ನು
ಕೆತ್ತಲಾಗಿದೆ......:-) ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ
ಈ ಶಿವಲಿಂಗಗಳು ನೀರಲ್ಲಿ ಮುಳುಗಿ ಕಣ್ಮರೆಯಾಗುತ್ತವೆ.
ಮತ್ತೆ ಬೇಸಗೆಯಲ್ಲಿ ದಿವ್ಯ ದರ್ಶನ ನೀಡುವಂತೆ ಮೇಲೆದ್ದು
ಕಾಣಿಸುತ್ತವೆ.
ಈ ಕ್ಷೇತ್ರದ ಬಗ್ಗೆ ಪೂರ್ಣ ವಿವರಣೆ ನೀಡುವ ಒಂದು ಸುಂದರ
ಲೇಖನ ಇಲ್ಲಿದೆ. ಆಸಕ್ತರು ಓದಿ ಮಾಹಿತಿ ಪಡೆಯ ಬಹುದು.
ಅಲ್ಲದೆ. ಸುಲಭದಲ್ಲಿ ಈ ಕ್ಷೇತ್ರವನ್ನು ಸಂದರ್ಶಿಸಿ ಪುನೀತರಾಗ
ಬಹುದು.......:-) ಪ್ರವಾಸಿಗಳಿಗೊಂದು ಸುಂದರ ಪ್ರಕೃತಿ ಪರಿಸರ
ಪ್ರವಾಸ, ಹಾಗೂ ತೀರ್ಥ ಕ್ಷೇತ್ರ ಯಾತ್ರೆ ಮಾಡ ಬಯಸುವವರಿಗೆ
ಒಂದು ಪವಿತ್ರ ಶಿವ ಕ್ಷೇತ್ರ.....:-)
ಈ ಕ್ಷೇತ್ರವನ್ನು ಸಂದರ್ಶಿಸಲು ಸರಿಯಾದ
ಸಮಯ ಬೇಸಿಗೆ ಕಾಲ...ಎಪ್ರಿಲ್ ಅಥವಾ ಮೇ ತಿಂಗಳು.
ಸಣ್ಣಗೆ ಜುಳು ಜುಳು ಹರಿಯುವ ನದಿ ನೀರಿನ ಮಧ್ಯದಲ್ಲಿ
ಸಾವಿರಾರು ಶಿವಲಿಂಗ ಗಳನ್ನು ನೋಡುವುದು ಕಣ್ಣಿಗೊಂದು
ಹಬ್ಬದಂತೆಯೂ ಹೌದು, ಶಿವ ಭಕ್ತಿಗೆ ಪ್ರೇರಣೆಯೂ ಹೌದು.
ನನ್ನೂರು ಹುಬ್ಬಳ್ಳಿಗೂ ಇದು ಸಮೀಪವಿರುವುದರಿಂದ
ನಾನು ಸ್ವತಃ ಸಂದರ್ಶಿಸಿದ ಕ್ಷೇತ್ರವಿದು...... :-)

No comments:

Post a Comment